ಗಜೇಂದ್ರಗಡದಲ್ಲಿ `ಬೃಂದಾವನ`
Posted date: 02 Tue, Jul 2013 – 06:27:15 PM

ಶ್ರೀ ಸೀತಾಭೈರವೇಶ್ವರ ಪ್ರೊಡಕ್ಷನ್ ಪ್ರೈ. ಲಿ., ಲಾಂಛನದಡಿಯಲ್ಲಿ ಡಿ.ಸುರೇಶ್‌ಗೌಡ,  ಪಿ.ಎಸ್. ಶ್ರೀನಿವಾಸಮೂರ್ತಿ ನಿರ್ಮಿಸುತ್ತಿರುವ ಈ ವರ್ಷದ ಅದ್ದೂರಿ ಚಿತ್ರವೆಂದೇ ಹೇಳಲಾಗುತ್ತಿರುವ ಬಹುತಾರಾಗಣದ ಬೃಂದಾವನ ಚಿತ್ರಕ್ಕೆ ಈಗ ಗಜೇಂದ್ರಗಡದಲ್ಲಿ ಚಿತ್ರೀಕರಣ ಮುಂದುವರೆದಿದೆ.

ಚಿತ್ರಕ್ಕಾಗಿ ಮೈಸೂರಿನ ಲಲಿತಮಹಲ್, ಚಾಮುಂಡಿಬೆಟ್ಟ ಹಾಗೂ ಸುತ್ತಮುತ್ತ ಹಲವಾರು ಸನ್ನಿವೇಶಗಳನ್ನು ಹಾಗೂ ಹೊಡೆದಾಟದ ಸನ್ನಿವೇಶವನ್ನು ನಂಜನಗೂಡು, ಮೇಲುಕೋಟೆ ಸುತ್ತಮುತ್ತ ಗೀತೆಯೊಂದನ್ನು ಕಲೈ ನೃತ್ಯ ನಿರ್ದೇಶನದೊಂದಿಗೆ ಹಾಗೂ ಕುಶಾಲ್‌ನಗರದಲ್ಲಿ ಭಾರೀ ಸುರಿವ ಮಳೆಯಲ್ಲೂ ಪಳನಿರಾಜ್ ಸಾಹಸ ನಿರ್ದೇಶನದಲ್ಲಿ ಹೊಡೆದಾಟದ ಸನ್ನಿವೇಶವನ್ನು ದರ್ಶನ್, ಕಾರ್ತಿಕ, ಮಿಲನ, ಸಾಯಿಕುಮಾರ್, ಸಾಧುಕೋಕಿಲ, ಜೈ ಜಗದೀಶ್ ಮುಂತಾದವರ ಅಭಿನಯದೊಂದಿಗೆ ರಮೇಶ್‌ಬಾಬು ಛಾಯಾಗ್ರಹಣದಲ್ಲಿ ನಿರ್ದೇಶಕ ಮಾದೇಶ್ ಚಿತ್ರಿಸಿಕೊಂಡರು. ಹೊಡೆದಾಟದ ಸನ್ನಿವೇಶಗಳನ್ನು ಏಳು ಕ್ಯಾಮರಾ, ಜಿಮ್ಮಿ ಜಿಪ್, ಬಳಸಿ ಚಿತ್ರಿಸಿಕೊಳ್ಳಲಾಯಿತು. ಚಿತ್ರದ ದ್ವಿತೀಯ ಹಂತದ ಚಿತ್ರೀಕರಣವು ಜುಲೈ ಹದಿನೈದರವರೆವಿಗೂ ಮುಂದುವರೆಯಲಿದೆ ಎಂದು ನಿರ್ಮಾಪಕ ಪಿ.ಎಸ್. ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.  

ಚಿತ್ರಕ್ಕೆ ಕೆ.ವಿ. ರಾಜು ಸಂಭಾಷಣೆ, ಹರಿಕೃಷ್ಣ ಸಂಗೀತ, ಕವಿರಾಜ್ ನಾಗೇಂದ್ರ ಪ್ರಸಾದ್ ಸಾಹಿತ್ಯ, ರಮೇಶ್‌ಬಾಬು ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ರವಿವರ್ಮ ಸಾಹಸ, ಗಣೇಶ್ (ಹೈದರಾಬಾದ್) ನೃತ್ಯ, ಲಿಂಗರಾಜು ನಿರ್ದೇಶನ ಸಹಕಾರ, ಸುಂದರರಾಜ್ ನಿರ್ಮಾಣ ಮೇಲ್ವಿಚಾರಣೆ, ಗಗನ್‌ಮೂರ್ತಿ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ಕೆ. ಮಾದೇಶ್.

ತಾರಾಗಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಾರ್ತಿಕಾ ನಾಯರ್, ಮಿಲನ, ಗೀತಾ, ಶರತ್‌ಬಾಬು, ಸಾಯಿಕುಮಾರ್, ನಿರೋಷ, ಜೈಜಗದೀಶ್, ಸಂಗೀತ, ಸಾಧು ಕೋಕಿಲ, ಮೋಹನ್ ಜುನೇಜಾ, ದೊಡ್ಡಣ್ಣ, ಕಿಲ್ಲರ್ ವೆಂಕಟೇಶ್, ಶೋಭಾ, ಜಾನ್ ಕೋಕೈನ್, ಅಜಯ್ ಹೈದರಾಬಾದ್, ಪ್ರಕಾಶ್ ಹೆಗ್ಗೋಡು, ಕುರಿ ಪ್ರತಾಪ, ವೀಣಾ ಸುಂದರ್, ಕಿಲ್ಲರ್ ವೆಂಕಟೇಶ್ ಮುಂತಾದವರು ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed